ಉಪ್ಪಿ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಎ.ಜಿ.ಮಂಜುನಾಥ್, ನರಸಿಂಹಮೂರ್ತಿ, ಬಸವರಾಜು ಹಾಗೂ ಸತ್ಯನಾರಾಯಣ ಅವರು ನಿರ್ಮಿಸುತ್ತಿರುವ ಚಿತ್ರ ‘ರಿಂಗ್ಮಾಸ್ಟರ್ ಚಿತ್ರಕ್ಕೆ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ.
‘ರಿಂಗ್ ಮಾಸ್ಟರ್ ಎಂಬ ಶೀರ್ಷಿಕೆಯಿಂದ ಆರಂಭವಾದ ಈ ಚಿತ್ರಕ್ಕೆ ‘ಭಂಗಿರಂಗ ಎಂಬ ಹೆಸರಿಡಲಾಗಿತು. ಈಗ ಮತ್ತೆ ಚಿತ್ರಕ್ಕೆ ‘ರಿಂಗ್ಮಾಸ್ಟರ್ ಎಂಬ ಶೀರ್ಷಿಕೆಯನ್ನೇ ಇಡಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ವಿಶೃತ್ ನಾಯಕ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಅರುಣ್ಸಾಗರ್ ಅಭಿನಯಿಸುತ್ತಿದ್ದಾರೆ. ಅನುಶ್ರೀ, ಶೃಂಗ, ಶ್ವೇತ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಸಿನಿಟೆಕ್ ಸೂರಿ ಅವರ ಛಾಯಾಗ್ರಹಣವಿದೆ. ಹರೀಶ್ ಸಂಕಲನ, ಅರುಣ್ಸಾಗರ್ ಕಲಾ ನಿರ್ದೇಶನ, ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ವಿಶೃತ್ ನಾಯಕ್ ಬರೆದಿದ್ದಾರೆ.